Tuesday 28 June 2022

ಶಾಸನ(Kannada inscription , Rameshwara Temple --Ramatheertha, Athani, Karnataka)

 



1. 0 ಸ್ವಸ್ತಿ ಶ್ರೀ ಸಕವರಿಸಂ ೧೨೮೨ನೆಯ ಸಾರ್ವರಿ ಸಂವತ್ಸರ
2. ದ ವಯಿಸಾಖ ಸು ೧೫ ಮಂಗಳವಾರದಲು || ಶ್ರೀ ಮತು
3. ಮುದುನೂರಾ ಮೂಲ ಸ್ಥಾನಿಕ . ದೇವರ | ಪುನ ಪ್ರತಿಷ್ಟೆ| ಜೀರ್ನ್ನೋ
4. ದ್ಧಾರ| ದೇವರ ಗ . . ಬಾವಿ ಜೀರ್ನ್ನೋದ್ಧಾರವಂ ಮಾ
5. ಡಿ ವಿಸ್ವನಾಥನೆಂಬ ಜಂಗಮ ಮಾಡಿಸಿದರು| ಮಂಗ
6. ಳ ಮಹಾಶ್ರೀ| ಎರಡನೆಯ ಜೀರ್ನೋದ್ಧಾರ ಸಕವರಿಸಂ
7. ೧೨೮೬ನೆಯ ಸೂಬಕ್ರಿತು ಸಂವತ್ಸರದ ಪಾಲ್ಗುಣ ಬ ೫ ಸುಕ್ರ
8. ವಾರದಲು ಶ್ರೀಮತು . . ಮಱಿ ತೀರ್ಥ್ಥದ ರಾಮನಾಥ ದೇ
9. ವರ ಪುನ ಪ್ರತಿಷ್ಟೆ| ಸಿವಾಲ್ಯದ ಜೀರ್ನ್ನೋದ್ಧಾರವ ಮಾಡಿದರು|
10. ವಿಸ್ವನಾಥನೆಂಬ ಜಂಗಮ ಮಾಡಿಸಿದರು ಮಂಗಳ ಮ
11. ಹ ಶ್ರೀ ಶ್ರೀ ಶ್ರೀ ಶ್ರೀ ಶ್ರೀ
ಈ ಶಾಸನವು ಸಾ.ಶ 1360 ಹಾಗೂ 1363ರಲ್ಲಿ ವಿಶ್ವನಾಥ ಎಂಬ ಜಂಗಮರು ರಾಮನಾಥ ದೇವರ ಪುನಃ ಪ್ರತಿಷ್ಟೆ, ಎರಡು ಬಾರಿ ಜೀರ್ಣೋದ್ಧಾರ ಹಾಗೂ ಬಾವಿಯನ್ನು ಜೀರ್ಣೋದ್ಧಾರ ಮಾಡಿರುವ ಮಾಹಿತಿ ನೀಡುತ್ತದೆ

Saturday 25 June 2022

ನೀ ನಾ


ನೀ ನಾ 

-----------------------------------------------

ನೀ ತೋರುವ ಪ್ರೀತಿಗೆ ನಾ ಬೇಡ  ಅನ್ನೇನ

ಅಮಾಸಿ ದಿನ ದುರಡಿ ಹೋಳಿಗೆ , ಬೊಗಾಣಿ ಅನ್ನ ಆ೦ಬ್ರ ಕಾಲಿಮಾಡಲಿಲ್ಲೆನ 


ನೀ ಮಾಡುವ ಮಾಯಕ ಮೈ ಮರೀಲಿಲ್ಲೇನ

ಕೊಬ್ಬರಿ ಎಣ್ಣೀ ಹಚ್ಚಿಸಿಕೊಂಡ ಎರಕೊಳ್ಳಲ್ಲಿಲ್ಲೆನ


ನೀ ಮಾಡುವ ಚೇಷ್ಟೆಗೆ ನಾ ಚಡಪಡಿಸಿದಿನೇನ 

ಇಬ್ಬರು ಕುಡಿ ಹೊಟ್ಟೆ ಹುಣ್ಣಾಗುವಂಗ ನಗಲ್ಲಿನೆನ


ನೀ ಬಂಗಾರ ಒಡವೆ ನೋಡಿ ಕೊರಳಕ್ಕ ಸೊಂಟಕ್ಕ ಕೈಯಾಡಸಿಲ್ಲಿಲ್ಲೆನ 

ಮರುದಿನ ಟಿಕ್ಕಿ ಸರ ಬೋರಮಾಳ ಡಾಬಾ ತರಲ್ಲಿಲ್ಲೆನ


ನೀ ಪಂಚಮಿಗೆ ಉಂಡಿ ಮಾಡಿ ದನಿಲ್ಲಿಲ್ಲೆನ 

ಕಡೆ ಪಾಟಿನ ಮನೆಗೆ ಜೋಕಾಲಿ ಕಟ್ಟಿ ತೂಗಲ್ಲಿಲ್ಲೆನ


ನೀ ತವರ್ಮನೆ ನೆನಸಿಕೊಳ್ಳಲ್ಲಿಲ್ಲೆನ 

ನಿನ್ನ ಹಡದವರು ಬಳುವಳಿಯಾಗಿ ಕೊಟ್ಟ ಆಕಳನ್ನ ಬ್ಯಾಡನ್ನೆನ 


ನೀ ಎದೇಮ್ಮಿನ ಹಿಂಡಲ್ಲಿಲ್ಲೆನ 

ಗಿಪ್ಪದಹಾಲಿನ ವಡಿ ಮಾಡಿಕೊಡಲಿಲ್ಲೇನ 


ನೀ ನಾ ಅಂದ ಜಗಳ ಮಾಡಲಿಲ್ಲೆನ  

ರಾತ್ರಿ ಹೊತ್ತು ಒಂದಾಗಲ್ಲಿಲ್ಲೆನ


                     --ಪ್ರಶಾಂತ್ ಸವದಿ